ಪಹರೆ

ನಿರಂತರ ಹಸಿವಿನ ಕೂಗು
ಧಾನ್ಯಗಳ ಸಂಗ್ರಹ ಜ್ಞಾನ ಕಣಜ
ಹೊಸ ಮಳೆ ಹೊಸ ಬೆಳೆ
ಹೊಸ ಹುಟ್ಟು ಪಡೆವ ಜನ್ಮ.

ಕಣ್ಣಿಗೆ ಕಾಣುವ ಆಕಾರ ವಿಕಾರ
ಜೀವ ಜಲ ಹರಿದು ಹರಿದು
ತಂಪಾದ ಪರಿವರ್ತನೆಯ ಹಾದಿ
ದೊಡ್ಡವರಾದವರೆಲ್ಲ ಗುರುಗಳು.

ಅರೆದುಕೊಂಡ ಬದುಕು ತೆರೆದ ಕಣ್ಣು
ಒಳಗೊಳಗೆ ಬರಿದಾಗಿ ತುಂಬುವ ಜಲ
ಎತ್ತರಕೆ ಹಾರಿದ ಹಕ್ಕಿಯ ತುಡಿತ
ಸೆಳೆದು ಅಪ್ಪುವ ಮೋಹ ಗುರುತ್ವ.

ಒಂದು ದಾಟು ದಾಟಲು ಬೇಕು
ಬದುಕ ನದಿಯಲಿ ತೇಲಿ ದೋಣಿ
ಆಚೆದಡ ತಲುಪಿ ನಡೆವ ಛಾತಿ
ಪಹರೆದಾಟಿ ಬಂದವರು ಅಲ್ಲಮರು.

ಮೋಹವಿಲ್ಲದ ಉಸಿರು ದಾಹವಿಲ್ಲದ ಅರಿವು
ಕಳೆದ ಬಯಲು ತುಂಬ ತಿಳಿಗಾಳಿ
ಎಲ್ಲಿಯೂ ನಿಲ್ಲದ ನಡುಗೆ ದಾರಿ
ಕಾಲದಲ್ಲಿ ಮಾತ್ರ ಹೊರಡುವ ವಿದಾಯ.

ಇದ್ದದ್ದು ಇದ್ಹಾಂಗ ಇಲ್ಲದ್ದು ಇಲ್ಲದ್ಹಾಂಗ
ಕಾರ್ಯ ಕಾರಣ ಪ್ರೀತಿ ಪರಿಚಾರಕ
ಎಷ್ಟೊಂದು ಹೂವುಗಳು ಅರಳಿದವು
ಅವನ ಪಹರೆ ಕಾಳಜಿಯ ತೋಟದಲಿ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸ್ವರ್ಗದಲಿ ದೇವ ನಗುತಿಹನೇನು?
Next post ಪೂರ್ಣ ಜೀವಿ

ಸಣ್ಣ ಕತೆ

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ಅಮ್ಮ

    ‘ಅಮ್ಮನ್ಗೆ ಯಿಡೀ ರಾತ್ರೆಲ್ಲ ವಾಂತಿ ಭೇದಿ ವುಬ್ಸ ಆಯಾಸ... ಕುತ್ರೂಸಾ... ಬಾಳಾ ಯೆಚ್ಕುಡ್ಮೆಯಾಗಿ ರಾಮ್ಪಾರ್ದ ಡಾಕಿಟ್ರಾತ್ರ ತೋರ್ಸಿದ್ರು ಗುಣಾಗಿಲ್ಲ! ನೀ ಆದಷ್ಟು ಗಡಾನೇ ವೂರ್ಗೆ ಬಾಣ್ಣ...’ ಸೇಕ್ರಿ,… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಮುಗ್ಧ

    ಆಲೀ........ ಏ ಆಲೀ........ ಐಸಮ್ಮ ಮಗನನ್ನು ಎಷ್ಟು ಜೋರಾಗಿ ಕರೆದರೂ ಆಲಿಯಿಂದ ಉತ್ತರ ಬರಲಿಲ್ಲ. ಒಂದು ಕಡೆ ಕತ್ತಲೆಯಾಗುತ್ತಾ ಬರುತ್ತಿದೆ. ಬೀಡಿ ಕಟ್ಟುಗಳನ್ನು ಸಂಜೆಯ ಒಳಗೆ ಬ್ರಾಂಚಿಗೆ… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

cheap jordans|wholesale air max|wholesale jordans|wholesale jewelry|wholesale jerseys